
ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ;ಎಸ್ಎಫ್ಐ ಆರೋಪ.!
ಈಗಲೂ ಕಾಲ ಮಿಂಚಿಲ್ಲ ಜನತೆಯ ಕನ್ನಡದ ಅಸ್ಮೀತೆಯ ಪ್ರಶ್ನೆಗಳ ಕುರಿತು , ಮಕ್ಕಳ ,ಮಹಿಳೆಯರು ಕುರಿತು, ಕನ್ನಡ ಶಾಲೆಗಳ ಉಳಿವಿನ ಕುರಿತು ಗೋಷ್ಠಿಗಳನ್ನು ಆಯೋಜಿಸಿ ಮತ್ತು ಜಿಲ್ಲೆಯ ಹಿರಿಯ ಸಾಹಿತಿಗಳನ್ನು, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರನ್ನು ಹಾಗೂ ಹೋರಾಟಗಾರರನ್ನು, ಕಲಾವಿದರನ್ನು, ಚಿಂತಕರನ್ನು ,ಸಾಹಿತ್ಯಾಭಿಮಾನಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಹಿತ್ಯ ಸಮ್ಮೇಳನವು ಜನರ ಪರವಾದ ನಿಲುವು ನಿರ್ಣಯಗಳನ್ನು ಜಾರಿಗೆ ಮುಂದಾಗಬೇಕು.
JanadhwaniNewsGajendrgad ಗಜೇಂದ್ರಗಡ: ನಗರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುವತ್ತಿರುವ ೧೦ನೇ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ನಡೆಯುತ್ತಿದ್ದು ಆದರ ಆಮಂತ್ರಣಿಕೆಯಲ್ಲಿ ಸಾಹಿತಿಗಳು, ಚಿಂತಕರು, ಕಲಾವಿದರು, ಹೋರಾಟಗಾರರು, ವಿದ್ವಾಂಸರು,ತುಂಬಿರದೆ ಕೇವಲ ರಾಜಕೀಯ ನಾಯಕರುಗಳೆ ತುಂಬಿದ್ದಾರೆ ಎಂದು ಎಸ್ಎಫ್ಐ ಆರೋಪ ಮಾಡಿದೆ.
10ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಅಧ್ಯಕ್ಷರಾದ ಪ್ರೋ ಚಂದ್ರಶೇಖರ ವಸ್ತ್ರದ ಅವರ ಸರ್ವಾಧ್ಯಕ್ಷತೇಯಲ್ಲಿ ಒಳ್ಳೆಯ ಗೋಷ್ಠಿಗಳನ್ನು ಆಯೋಜಿಸಿ ಜನರ ಅಭಿವೃದ್ಧಿಯ , ಕನ್ನಡ ಅಭಿವೃದ್ಧಿಯ ಕುರಿತು ಚರ್ಚೆ ನಡೆಯಬೇಕಾಗಿತ್ತು ಆದರೆ ಎಲ್ಲಾ ಗೋಷ್ಠಿಗಳು ಮಹಿಳೆ, ಮಕ್ಕಳ, ಯುವಜನತೆಯ,ಅಭಿವೃದ್ಧಿ, ಕನ್ನಡದ ಅಸ್ಮೀತೆ ಮತ್ತು ಸ್ಥಳೀಯ ಜನತೆಯ ಸಮಸ್ಯೆಗಳನ್ನು ಚರ್ಚಿಸಿದೆ. ಕೇವಲ ವಿಜೃಂಭಣೆಯಿಂದ ನಗರವನ್ನು ಅಲಂಕರಿಸಿ ರಾಜಕೀಯ ನಾಯಕರ ಪ್ಲೇಕ್ಸ್ ಗಳ ರಾರಾಜಿಸಲು ಸೀಮಿತವಾಗಿರುವುದು ಸರಿಯಲ್ಲ ಎಂದು ಆಕ್ರೋಶ್ ವ್ಯಕ್ತವಾಗಿದೆ.
ಈಗಲೂ ಕಾಲ ಮಿಂಚಿಲ್ಲ ಜನತೆಯ ಕನ್ನಡದ ಅಸ್ಮೀತೆಯ ಪ್ರಶ್ನೆಗಳ ಕುರಿತು , ಮಕ್ಕಳ ,ಮಹಿಳೆಯರು ಕುರಿತು, ಕನ್ನಡ ಶಾಲೆಗಳ ಉಳಿವಿನ ಕುರಿತು ಗೋಷ್ಠಿಗಳನ್ನು ಆಯೋಜಿಸಿ ಮತ್ತು ಜಿಲ್ಲೆಯ ಹಿರಿಯ ಸಾಹಿತಿಗಳನ್ನು, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರನ್ನು ಹಾಗೂ ಹೋರಾಟಗಾರರನ್ನು, ಕಲಾವಿದರನ್ನು, ಚಿಂತಕರನ್ನು ,ಸಾಹಿತ್ಯಾಭಿಮಾನಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಹಿತ್ಯ ಸಮ್ಮೇಳನವು ಜನರ ಪರವಾದ ನಿಲುವು ನಿರ್ಣಯಗಳನ್ನು ಜಾರಿಗೆ ಮುಂದಾಗಬೇಕು. ಸಾಹಿತ್ಯ ಸಮ್ಮೇಳನವು ಜನರ ನುಡಿಯಾಗಬೇಕೆ ವಿನಹ ರಾಜಕೀಯ ಸುಮಾವೇಶ ಆಗದಿರಲಿಯೆಂದು ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ ಎಫ್ ಐ ವಿದ್ಯಾರ್ಥಿ ಸಂಘಟನೆಯು ಒತ್ತಾಯಿಸುತ್ತದೆಯೆಂದು ಪ್ರಕಟನೆ ಮೂಲಕ ತಿಳಿಸಿದ್ದಾರೆ.