
ಶಾಮಿಯಾನ ಸಂಘದವರ ಸೇವೆ ಶ್ಲಾಘನೀಯ: ಶಾಸಕ ಜಿ.ಎಸ್.ಪಾಟೀಲ.
ಅದ್ದೂರಿಯಾಗಿ ನಡೆದ ಗಜೇಂದ್ರಗಡ ತಾಲೂಕಾ ಶಾಮಿಯಾನ ಸಂಘದ ೬ ನೇವಾರ್ಷಿಕೋತ್ಸವ ಮತ್ತು ಕೋಟೆನಾಡು ಉತ್ಸವ.
ಶಾಮಿಯಾನ ಹಾಕುವವರ ಮನಸ್ಸು ಹೂವಿನಂತದ್ದು : ವಿಜಯಮಂಹಾತ ಶ್ರೀಗಳು.
ಸಮಾರಂಭದ ನಿಜ ಶ್ರಮಜೀವಿಗಳು ಶಾಮಿಯಾನದವರು : ಟೆಕ್ಕೆದ ಬಾವನವರು.
ಜನಧ್ವನಿ ಕನ್ನಡ ನ್ಯೂಸ:
ಗಜೇಂದ್ರಗಡ;
ಹಬ್ಬ ಜಾತ್ರೆ, ಮದುವೆ,ವಾರ್ಷಿಕೋತ್ಸವ, ಸಭೆ- ಸಮಾರಂಭಗಳಲ್ಲಿ ಅಲಂಕಾರ, ನಡೆಯಲು ಶಾಮಿಯಾನ ಮತ್ತು ಧ್ವನಿವರ್ಧಕಗಳನ್ನು ಅಳವಡಿಸುವವರ ಪಾತ್ರ ಬಹುಮುಖ್ಯ ವಾಗಿದೆ ಎಂದು ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ರೋಣ ಶಾಸಕ ಜಿ.ಎಸ್.ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಜಿ.ಕೆ.ಬಂಡಿ ಗಾರ್ಡನ್ ದಲ್ಲಿ ಶಾಮಿಯಾನ ಸಪ್ಲೇಯರ್ಸ ಲೈಟಿಂಗ್, ಧ್ವನಿವರ್ದಕ ಮತ್ತು ಡೆಕೋರೇಷನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಗಜೇಂದ್ರಗಡ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ದಿನ ನಿತ್ಯದ ಬದುಕಿನಲ್ಲಿಯ ಸಭೆ ಸಮಾರಂಭ ಮತ್ತು ಸಾವು ನೋವುಗಳು ಸಂಭವಿಸಿದ ಸಂದರ್ಭದಲ್ಲಿ ಶಾಮಿಯಾನಗಳು ಬಹುಮುಖ್ಯವಾಗಿ ಬೇಕಾಗುತ್ತವೆ. ಮದುವೆ, ಜಾತ್ರೆ ಮತ್ತು ಹಬ್ಬದ ದಿನಗಳಲ್ಲಿ ಮನೋರಂಜನೆಗಾಗಿ ನಾವೆಲ್ಲರೂ ಧ್ವನಿವರ್ದಕಗಳನ್ನು ಬಳಸುತ್ತೇವೆ ಎಲ್ಲಾ ಸಂದರ್ಭಗಳಲ್ಲಿ ಅನುಕೂಲ ಮಾಡಿಕೊಡುವ ಶಾಮಿಯಾನ ಮಾಲೀಕರ ಸೇವೆ ಶ್ಲಾಘನೀಯ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು
ಜಗದ್ಗುರು ವಿಜಯಮಹಾಂತ ಮಹಾಸ್ವಾಮಿಗಳು ಮೈಸೂರುಮಠ ಹಾಗೂ ಹಜರತ ಸೈಯದ್ ನಿಜ್ಜಾಮುದ್ದಿನ ಷಾ ಆರ್ಶಫಿ ಮಕಾನದಾರ ವಹಿಸಿ ಆರ್ಶಿವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈರಣ್ಣ ತಾಳಿಕೋಟಿ, ಕುಬೇರಗೌಡ ಚನ್ನವೀರಗೌಡ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಮರೇಶ ಹಿರೇಮಠ, ಸುಭಾಷ ಮ್ಯಾಗೇರಿ, ಸಿದ್ದಪ್ಪ ಬಂಡಿ, ಚಂಬಣ್ಣ ಚವಡಿ, ಎಚ್.ಎಸ್.ಸೊಂಪೂರ, ಶಿವರಾಜ ಘೋರ್ಪಡೆ, ಶ್ರೀಧರ ಬಿದರಳ್ಳಿ, ನರಸಿಂಹ ಮೂರ್ತಿ, ಎನ್.ರಾಮರಾವ್, ಕುಬೇರಗೌಡ ಚನ್ನವೀರಗೌಡ, ರವೀಂದ್ರಬಾಬು ಮೆಣಸಿನಕಾಯಿ, ಸುರೇಶ ಕಲಬುರಗಿ, ಮೋಹನ ಗಜಾಕೋಶ, ಬಿ.ಎಂ.ಸೋಮಶೇಖರ, ಮಕ್ತುಂಸಾಬ ಮುಲ್ಲಾ, ರಾಜೇಸಾಬ ಲಕ್ಷ್ಮೇಶ್ವರ, ಉಮೇಶ ಕಾಳೆ, ರಾಜೂ ಹಟ್ಟಿ, ಕೆ.ಬಸವರಾಜ ಗೌಡರ, ಎಂ.ಕೆ.ಮಾಳಶೆಟ್ಟಿ, ಸಂಗಮೇಶ ಬೀಳಗಿ, ಶಬೀರ ಈಡಿ, ವೀರಣ್ಣ ಮಳಗಿ, ಸೇರಿದಂತೆ ತಾಲೂಕಾ ಶಾಮಿಯಾನ ಸಪ್ಲಾಯರ್ಸ ಮಾಲೀಕರು ಇದ್ದರು.