ಗದಗಅಂತಾರಾಷ್ಟ್ರೀಯಅಪಘಾತಆತ್ಮಹತ್ಯೆಉಡುಪಿಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಬಾಗಲಕೋಟೆಬಿಸಿನೆಸ್ ಕನೆಕ್ಟ್ರಾಜಕೀಯರಾಜ್ಯ ಸುದ್ದಿರಾಷ್ಟೀಯ ಸುದ್ದಿವಿಡಿಯೋಗಳುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಜಿಲ್ಲಾ ಸಮ್ಮೇಳನವನ್ನು ಯಶಸ್ಸಿಗೆ ಸಕಲ ಸಿದ್ಧತೆ; ಶಾಸಕ ಜಿ.ಎಸ್.ಪಾಟೀಲ..!

ದೂರ ಊರಿನಿಂದ ಬರುವ ಸಾಹಿತಿಗಳಿಗೆ,ಗೊಷ್ಠಿಗಳಿಗೆ ಕಲಾತಂಡಗಳಿಗೆ ವಸತಿ ವ್ಯವಸ್ಥೆ ಮಾಡಬೇಕು, ಸಾರ್ವಜನಿಕರ ಆಕರ್ಷಣೆ ಮಾಡುವ ಕಲಾತಂಡಗಳಿಗೆ ಆಹ್ವಾನ ನೀಡಿ ದಿನಕ್ಕೆ ಒಂದರಂತೆ ವ್ಯವಸ್ಥೆ ಮಾಡಿ, ಖಾಸಗಿ ಶಾಲೆಗಳ ವಾಹನಗಳನ್ನು ಬಳಸಿ ಸಾರಿಗೆ ವ್ಯವಸ್ಥೆ ಮಾಡಬೇಕು. ಪುರಸಭೆಯಿಂದ ಹೆಚ್ಚಿನ ಪ್ರಚಾರವಾಗಬೇಕಿದೆ. ಇದಕ್ಕೆ ಸಕಲ‌ ಸಿದ್ದತೆ ಮಾಡಿಕೊಳ್ಳಬೇಕಿದೆ ಮುಂದಿನ ಸಭೆಯಲ್ಲಿ ಇವೆಲ್ಲವುಗಳು ಸಮರ್ಪಕವಾಗಿ ನಿರ್ವಹಣೆ ಮಾಡಬೇಕಿದೆ.

Share News

Janadhwani News Gajendrgada ಜನಧ್ವನಿ ಕನ್ನಡ ಸುದ್ದಿಮೂಲ ಗಜೇಂದ್ರಗಡ: ನಗರದ ಜಿ.ಕೆ.ಬಂಡಿ ಗಾರ್ಡನದಲ್ಲಿ ಜಿಲ್ಲಾ ಕಸಾಪ ಪ್ರಗತಿ ಪರಿಶೀಲನೆ ಸಭೆ ಗುರುವಾರ ನಡೆಯಿತು.

ಬಳಿಕ ರೋಣ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ದೂರ ಊರಿನಿಂದ ಬರುವ ಸಾಹಿತಿಗಳಿಗೆ,ಗೊಷ್ಠಿಗಳಿಗೆ ಕಲಾತಂಡಗಳಿಗೆ ವಸತಿ ವ್ಯವಸ್ಥೆ ಮಾಡಬೇಕು, ಸಾರ್ವಜನಿಕರ ಆಕರ್ಷಣೆ ಮಾಡುವ ಕಲಾತಂಡಗಳಿಗೆ ಆಹ್ವಾನ ನೀಡಿ ದಿನಕ್ಕೆ ಒಂದರಂತೆ ವ್ಯವಸ್ಥೆ ಮಾಡಿ, ಖಾಸಗಿ ಶಾಲೆಗಳ ವಾಹನಗಳನ್ನು ಬಳಸಿ ಸಾರಿಗೆ ವ್ಯವಸ್ಥೆ ಮಾಡಬೇಕು. ಪುರಸಭೆಯಿಂದ ಹೆಚ್ಚಿನ ಪ್ರಚಾರವಾಗಬೇಕಿದೆ. ಇದಕ್ಕೆ ಸಕಲ‌ ಸಿದ್ದತೆ ಮಾಡಿಕೊಳ್ಳಬೇಕಿದೆ ಮುಂದಿನ ಸಭೆಯಲ್ಲಿ ಇವೆಲ್ಲವುಗಳು ಸಮರ್ಪಕವಾಗಿ ನಿರ್ವಹಣೆ ಮಾಡಬೇಕಿದೆ. ಒಟ್ಟಿನಲ್ಲಿ ಸಮ್ಮೇಳನ ಯಶಸ್ಸುಗೆ ಎಲ್ಲರೂ ಕೈ ಜೋಡಿಸಬೇಕಿದೆ ಎಂದರು.

ಪ್ರಾಸ್ತಾವಿಕವಾಗಿ ಕಸಾಪ ಜಿಲ್ಲಾಧ್ಯಕ್ಷ, ವಿವೇಕಾನಂದಗೌಡ ಪಾಟೀಲ ಮಾತನಾಡಿ ಸಮ್ಮೇಳನದ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಣೆ ಮಾಡಲು ಈಗಾಗಲೇ ನಿರ್ಧಾರ ತೆಗೆದುಕೊಂಡಿದ್ದೇವೆ. ೧೧ ನೇ ತಾರೀಖಿನಿಂದ ಭುವನೇಶ್ವರಿ ರಥಯಾತ್ರೆ ತೆರಳತ್ತಾ ಇದೆ. ೧೯ ರಂದು ಅಧಿಕೃತ ಕಾರ್ಯಕ್ರಮ ಪ್ರಾರಂಭವಾಗತ್ತಾ ಇದೆ. ಪರಿಷತ್ತು ವತಿಯಿಂದ ಗೊಷ್ಠಿಗಳಲ್ಲಿ ಭಾಗಿಯಾಗುವರಿಗೆ ಪತ್ರಗಳು ಬಂದಿವೆ‌. ಸ್ಮರಣ ಸಂಚಿಕೆ ತರಲು ಅದಕ್ಕೆ ಅಂತರಗಂಗೆ ಎಂಬ ಶೀರ್ಷಿಕೆ ಇಟ್ಟಿದ್ದೇವೆ. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರಗಳನ್ನು ನೀಡುತ್ತಾ ಇದ್ದೇವೆ. ಹೀಗೆ ಅನೇಕ ಕೆಲಸಗಳನ್ನು ಮಾಡುತ್ತಾ ಸಮ್ಮೇಳನವು ಯಶಸ್ಸುಗೆ ಶ್ರಮಿಸಿದ್ದೇವೆ ಎಂದರು.

ದಾಸೋಹ ಸಮಿತಿಯ ಸದಸ್ಯರಾದ ಶಶಿಧರ ಹೂಗಾರ ಮಾತನಾಡಿ ೧೯ ನೇ ರಂದು ಶಿರಾ ಅನ್ನ ಸಾಂಬರ, ಬದನೆಕಾಯಿ ೫ ಸಾವಿರ ಜನರಿಗೆ ೨೦ ರಂದು ೧ ಸಾವಿರ ಜನಕ್ಕೆ ಉಪ್ಪಿಟ್ಟು, ಶಿರಾ, ಮದ್ಹಾನ ಗೋದಿ ಹುಗ್ಗಿ ಅನ್ನ ಸಾಂಬರ, ಬದನೆಕಾಯಿ ೨೧ ರಂದು ಅವಲಕ್ಕಿ, ಮಿರ್ಚಿ, ಮಧ್ಯಾನ್ಹ ಬುಂದೆ ಬದನೆಕಾಯಿ ಅನ್ನ ಸಾಂಬಾರ ಜಕ್ಜಲಿ ಗ್ರಾಮದವರಿಗೆ ಅಡುಗೆ ಜವಾಬ್ದಾರಿ ನೀಡಲಾಗಿದೆ ಎಂದರು.

ಮೆರವಣಿಗೆ ಸಮಿತಿಯ ಸದಸ್ಯ ರಾಜೂ ಸಾಂಗ್ಲೀಕರ್ ಮಾತನಾಡಿ,ಮೆರವಣಿಗೆಯೂ ನಗರದಲ್ಲಿನ ಪ್ರಮುಖ ವೃತ್ತಗಳಲ್ಲಿ ಮೆರವಣಿಗೆ ಸಾಗುತ್ತದೆ. ಮೆರವಣಿಗೆಯಲ್ಲಿ ಭಾಗಿಯಾಗುವ ಕಲಾತಂಡಗಳಿಗೆ ವಸತಿ ಸೌಲಭ್ಯವನ್ನು ಮಾಡಲಾಗಿದೆ. ಸ್ತಂಭ ಚಿತ್ರಗಳನ್ನು ಮೆರವಣಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ. ಬಿ.ಎಮ್.ಜೆ. ಕಾಲೇಜಿನ ವಿಧ್ಯಾರ್ಥಿಗಳು ವಿನೂತನ ವಾಗಿ ಭಾಗಿಯಾಗಲು ಸೂಚಿಸಿದ್ದೇವೆ. ಒಟ್ಟಿನಲ್ಲಿ ಅದ್ದೂರಿ ಮೆರವಣಿಗೆ ಮಾಡಲು ಸನ್ನದ್ಧರಾಗಿದ್ದೇವೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಿತಿ ಅಧ್ಯಕ್ಷರಾದ ಶಂಕ್ರಣ್ಣ ಸಂಕಣ್ಣನವರ ಮಾತನಾಡಿ,ಒಟ್ಟು ೧೦ ಕಲಾ ತಂಡ ಭಾಗಿಯಾಗಲಿದ್ದು, ಸಂಜೆ ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತವೆ. ೩ ದಿನಗಳ ಕಾಲ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾಡಲು ಸಕಲ ಸಿದ್ದತೆ ಮಾಡಿದ್ದೇವೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಮಾತನಾಡಿ,೪ ರಸ್ತೆಗಳಲ್ಲಿ ಲೈಟಂಗ್, ಮನೆ ಮನೆಗಳ ಮುಂದೆ ರಂಗೋಲಿ, ಮನೆಯ ಮೇಲೆ ಕನ್ನಡ ಬಾವುಟವನ್ನು ಕಟ್ಟುವಂತೆ ಧ್ವನಿ ವರ್ಧಕದ ಮೂಲಕ ಸೂಚನೆ ನೀಡಿದ್ದೇವೆ. ಎಂದರು.

ಗಜೇಂದ್ರಗಡ ತಹಶಿಲ್ದಾರರ ಕಿರಣಕುಮಾರ ಕುಲಕರ್ಣಿ, ವೇದಿಕೆ ನಿರ್ಮಾಣ ಅಧ್ಯಕ್ಷ ಪ್ರಭು ಚವಡಿ, ವೇದಿಕೆಯ ಕಾರ್ಯಕ್ರಮ ನಿರ್ವಹಣೆ ಸದಸ್ಯ ಎಫ್.ಎಸ್.ಕರಿದುರಗಣ್ಣನವರ, ಹಣಕಾಸು ಸಮಿತಿ ಅಧ್ಯಕ್ಷ ಸಿದ್ದಣ್ಣ ಬಂಡಿ, ವೇದಿಕೆ ನಿರ್ಮಾಣ ಸಮಿತಿ ಅಧ್ಯಕ್ಷ ವಿ.ಬಿ.ಸೊಮ್ಮನಕಟ್ಟಿಮಠ ಸೇರಿದಂತೆ ಅನೇಕರು ಇದ್ದರು‌.

ಇನ್ನೂ ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಸುಭಾಷ ಮ್ಯಾಗೇರಿ, ಸ್ಥಾಯಿ ಸಮಿತಿಯ ಚೇರ್ಮನ್ ಮುದಿಯಪ್ಪ ಮುಧೋಳ, ವೀರಣ್ಣ ಶೆಟ್ಟರ, ರಫೀಕ್ ತೋರಗಲ್, ಚಂಬಣ್ಣ ಚವಡಿ, ವಿ.ಆರ್.ಗುಡಿಸಾಗರ,

ಮಾರುತಿ ಕಲ್ಲೊಡ್ಡರ, ಮುತ್ತಣ್ಣ ಮ್ಯಾಗೇರಿ, ಬಸವರಾಜ ಹೂಗಾರ, ಶ್ರೀಧರ ಬಿದರಳ್ಳಿ, ರಾಮಚಂದ್ರ ಹುದ್ದಾರ, ರವಿ ಗಡೇದವರ, ಶಶಿಧರ ಹೂಗಾರ, ಶರಣು ಪೂಜಾರ, ರೇಣಪ್ಪ ಇಂಗಳೆ, ಶರಣಪ್ಪ ಚಳಗೇರಿ, ದುರಗಪ್ಪ ಮುಧೋಳ, ರಾಜೇಸಾಬ ಭಾಗವಾನ, ನಿಂಗಪ್ಪ ಕಾಶಪ್ಪನವರ, ಅರ್ಜುನ ರಾಠೋಡ, ಶ್ರೀಕಾಂತ ಅವಧೂತ, ಹನಮಂತ ರಾಮಜಿ , ಸಿದ್ದು ಗೊಂಗಡಶೆಟ್ಟಿ ಸೇರಿದಂತೆ ಅನೇಕರು ಇದ್ದರು.


Share News

Related Articles

Leave a Reply

Your email address will not be published. Required fields are marked *

Back to top button